ಲೇಖಕರು: ನಟರಾಜ್ ಹುಳಿಯಾರ್
ಪ್ರಕಾಶನ: ಸಾಹಿತ್ಯ ಅಕಾಡೆಮಿ
ಡಾ. ಡಿ. ಆರ್. ನಾಗರಾಜ್ (೧೯೫೪-೧೯೯೮) ಭಾರತದ ಮಹತ್ವದ ಸಂಸ್ಕೃತಿ ಚಿಂತಕರು, ವಿಮರ್ಶಕರು. ಸಾಹಿತ್ಯ ವಿಮರ್ಶೆ, ಸಂಶೋಧನೆ, ಸಂಸ್ಕೃತಿ ವಿಮರ್ಶೆ, ಸಾಮಾಜಿಕ ಸಿದ್ಧಾಂತಗಳು, ಚಳುವಳಿಗಳು, 'ಥಿಯರಿ ಮುಂತಾದ ಹಲವು ವಲಯಗಳಲ್ಲಿ ಅವರು ಆಳವಾಗಿ ತೊಡಗಿದ್ದರು. ಕನ್ನಡದಲ್ಲಿ ಅನನ್ಯ ಚಿಂತನಾ ಮಾರ್ಗಗಳನ್ನು ರೂಪಿಸಿದ ಡಿ.ಆರ್. ನಾಗರಾಜ್ ಇಂಗ್ಲಿಷ್ನಲ್ಲೂ ಬರೆದರು. ಅವರ ಕೃತಿಗಳು ಸಾಹಿತ್ಯ ವಿಮರ್ಶೆ, ಸಂಸ್ಕೃತಿ ಚಿಂತನೆ ಹಾಗೂ ಸಂಶೋಧನಾ ವಲಯಗಳಲ್ಲಿ ಮಹತ್ವದ ಸ್ಥಾನ ಪಡೆದಿವೆ. ಮಾರ್ಕ್ಸವಾದ, ಗಾಂಧೀವಾದ, ಲೋಹಿಯಾವಾದ, ಅಂಬೇಡ್ಕರ್ವಾದಗಳ ಗಂಭೀರ ಅನುಸಂಧಾನದಿಂದ ರೂಪುಗೊಂಡಿದ್ದ ಡಿ.ಆರ್. ಚಿಂತನೆ ಎಲ್ಲ ಕಾಲಕ್ಕೂ ಪ್ರಬುದ್ಧವಾದ ಸಂಸ್ಕೃತಿ ನಿರ್ಮಾಣದ ಸಖನಂತಿದೆ. ವಿಮರ್ಶೆಗೆ ಸೃಜನಶೀಲತೆ, ಕಥನ, ಬಹುಜ್ಞಾನ ಶಿಸ್ತುಗಳನ್ನು ಬೆಸೆದ ಡಿ.ಆರ್. ಅವೈದಿಕ ಚಿಂತನೆ, ನಿರ್ವಸಾಹತೀಕರಣ ಚಿಂತನೆಗಳ ಹೊಸ ಮಾರ್ಗಗಳನ್ನು ಸೃಷ್ಟಿಸಿದರು.
-(ಬೆನ್ನುಡಿಯಿಂದ)